ಬೆಂಗಳೂರಿನ ಯಲಹಂಕ ಸಮೀಪದ ಮೈಲಪ್ಪನಹಳ್ಳಿಯಲ್ಲಿ ಒಬ್ಬ ಪಾದ್ರಿ ಮತಾಂತರದ ಹುನ್ನಾರವಿಟ್ಟುಕೊಂಡು ಗ್ರಾಮಸ್ಥರನ್ನು ಪ್ರಾರ್ಥನೆಯ ನೆಪವೊಡ್ಡಿ ಮತಾಂತರಿಸುತ್ತಿರುವುದು ತಿಳಿದುಬಂದು, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಬೆಂಗಳೂರು ಮಹಾನಗರದ ಅಧ್ಯಕ್ಷರಾದ ರಾಜಣ್ಣನವರು ಅಲ್ಲಿನ ಗ್ರಾಮ ಪ್ರಮುಖರೊಂದಿಗೆ ಆ ಪಾದ್ರಿಯ ಮನೆಗೇ ಹೋಗಿ ಅವರಿಗೆ ಬುದ್ದಿಹೇಳಿ ನಮ್ಮ ಹಿಂದೂ ಸಮಾಜವನ್ನು ಮತಾಂತರದ ಮೂಲಕ ಒಡೆಯದಂತೆ ಎಚ್ಚರಿಸಿ ಬಂದಿರುತ್ತಾರೆ.
ಹಾಗೆಯೇ ಮೈಲಪ್ಪನಹಳ್ಳಿಯ ಗ್ರಾಮದ ಪ್ರಮುಖರಿಗೂ ಇಂತಹ ದುಷ್ಟ ಶಕ್ತಿಗಳನ್ನು ಅವರ ಗ್ರಾಮದಲ್ಲಿ ಇನ್ನುಮುಂದೆ ಚಿಗುರದಂತೆ ಗ್ರಾಮದ ಎಲ್ಲಾ ಹಿಂದುಗಳು ಒಗ್ಗಟ್ಟಿನಿಂದ ನಿಗಾವಹಿಸುವಂತೆಯೂ ಆಗ್ರಹಿಸಿರುತ್ತಾರೆ.
...
https://www.youtube.com/watch?v=SGalt1iWMw8
ಸಿಂದಗಿ ನ್ಯೂಸ್:
ಆ್ಯಂಕರ್: ಆಸ್ತಿಗಾಗಿ ಪಾಪಿ ಪತಿಯೊಬ್ಬ ತನ್ನ ಎರಡನೆ ಹೆಂಡತಿಯನ್ನು ಕೊಲೆಗೈದು ನೇಣು ಹಾಕಿ ಪೊಲೀಸರಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಪಿ.ಎಚ್. ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಗೌರಮ್ಮ (ಶಾಂತಮ್ಮ) ಮೂರಕಂಡಿ 40 ಕೊಲೆಯಾದ ದುರ್ದೈವಿಯಾಗಿದ್ದು, ನೀಲಕಂಠರಾಯ ಮೂರಕಂಡಿ ಕೊಲೆಗೈದ ಪಾಪಿ ಪತಿ. ಇನ್ನು ಗೌರಮ್ಮನ್ನು (ಶಾಂತಮ್ಮ) ಕೊಲೆಗೈದು ನೇಣು ಹಾಕಿದ್ದಾರೆ. ತನ್ನ ಆಸ್ತಿಯಲ್ಲಿ ಮೂರು ಎಕರೆ ಜಮೀನನ್ನು ನನ್ನ ಹೆಸರಿಗೆ ನೀಡುವಂತೆ ಗೌರಮ್ಮ(ಶಾಂತಮ್ಮ) ಕೇಳ್ತಾ ಇದ್ಲು, ಇದರಿಂದ ರೋಸಿ ಹೋದ ಪತಿ ತನ್ನ ಮೂರು ಎಕರೆ ಜಮೀನನ್ನು ನೀಡಿದ್ರೆ ತಾನು ಬೀದಿಗೆ ಬರ್ಬೇಕಾಗುತ್ತದೆ ಎಂದು ಪತಿ ಹಾಗೂ ತನ್ನ ಮೊದಲನೇಯ ಪತ್ನಿಯ ಕುಟುಂಬಸ್ಥರು ಸೇರಿ ಕೊಲೆಗೈದು ನೇಣು ಹಾಕಿದ್ದಾರೆ. ಪೊಲೀಸರು ಇನ್ನುಳಿದ ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..
ಮಲ್ಲಿಕಾಜು೯ನ ಅಲ್ಲಾಪೂರ
https://www.youtube.com/watch?v=3tMfsdKkLBY
ಡಿಕೆಶಿಗೆ ಎರಡು ಮಹತ್ವದ ಹುದ್ದೆ: ವಿನಯ್ ಗುರೂಜಿ ಭವಿಷ್ಯ
ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರಿಗೆ ಮಹತ್ವದ ಎರಡು ಹುದ್ದೆಗಳು ದೊರೆಯಲಿವೆದೆ. ಇನ್ನೂ ಅವರ ಪರೀಕ್ಷಾ ಸಮಯ ಮುಗಿದಿಲ್ಲ. ಅವರಿಗೆ ಇನ್ನೂ ಎರಡು ಪರೀಕ್ಷೆಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಹುದ್ದೆ ಸಿಗಲಿದೆ. ಅವರಿಗೆ ಗುರು ಭಕ್ತಿ ಇದೆ. ಅವರನ್ನ ಆ ಭಗವಂತ ಕೈ ಬಿಟ್ಟಿಲ್ಲ ಎಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಗೌರಿ ಗದ್ದೆ ಅವಧೂತ ದತ್ತ ಪೀಠದ ವಿನಯ್ ಗುರೂಜಿ ಹೇಳಿದರು.
#DKShivakumar #VinayGuruji #Portfolio D.k.shivakumar #Congres #BJP #JDS
...
https://www.youtube.com/watch?v=Ty9nTSQEI4A
ನೀರಗುಂದ ಕೆರೆ ಏರಿ ಒಡೆದ ಅಪಾರ ಬೆಳೆ ಹಾನಿ
ಚಿತ್ರದುರ್ಗ: ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರಗುಂದ ಕೆರೆ ಏರಿ ಒಡೆದು ನೀರು ವ್ಯರ್ಥವಾಗಿ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ಹರಿಯುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆರೆ ಏರಿ ಒಡೆದು ಹರಿಯುತ್ತಿರುವ ನೀರು ನೋಡಲು ಜನರು ಮುಗಿಬಿದ್ದಿದ್ದಾರೆ. ಅಪಾರ ಪ್ರಮಾಣದ ನೀರು ಸಮೀಪದಲ್ಲಿರುವ ಜಮೀನುಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತೆಂಗು, ಅಡಕೆ, ಮಕ್ಕೆಜೋಳ, ರಾಗಿ, ಈರುಳ್ಳಿ ಸೇರಿ ವಿವಿಧ ಬೆಳೆಗಳು ನೆಲಕಚ್ಚಿವೆ. ಇದರಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಹೀಗಾಗಿ ಸತತ ಬರಗಾಲದಿಂದ ಕಂಗೆಟ್ಟ ಅನ್ನದಾತ ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ಹಾನಿಗೀಡಾಗಿ ಸಂಕಷ್ಟ ಅನುಭವಿಸುವಂತಾಗಿದೆ.
...
https://www.youtube.com/watch?v=_gor2RgaU5E
ದಾವಣಗೆರೆ- ಅಧಿಕಾರದ ಕುರ್ಚಿ ಏರಿದರೆ ಸಾಕು ಹಮ್ಮು-ಬಿಮ್ಮು ಬರುವ ಮಂದಿಯೇ ಅಧಿಕ. ಆದರೆ, ಇದಕ್ಕೆ ಮೇಯರ್ ಎಸ್.ಟಿ. ವೀರೇಶ್ ವಿರುದ್ಧವೇ ಎನ್ನಬಹುದು!
ಅರೇ ಇದ್ಯಾಕೆ ಅಂತಿರಾ? ಕೆಳಮಟ್ಟದಿಂದ ಬೆಳೆದಯ ಬಂದು ಈಗ ಮೇಯರ್ ಕುರ್ಚಿ ಅಲಂಕರಿಸಿರುವ ಮೇಯರ್ #ವೀರೇಶ್ ಇತ್ತೀಚೆಗಷ್ಟೆ ಪಾಲಿಕೆ ಎದುರಿರುವ ರೈಲ್ವೆ ಅಂಡರ್ ಪಾಸ್ ನಲ್ಲಿ ನಿಂತಿದ್ದ ಕೊಳಚೆ ನೀರು, ಕಸ-ಕಡ್ಡಿಗಳನ್ನೆಲ್ಲಾ ಸ್ವತಃ ತಾವೆ ಎತ್ತಿ ಹಾಕಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟು ಸುದ್ದಿಯಾಗಿದ್ದರು. ಈಗ ಪಾರ್ಕ್ ಕೂಡ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದಾರೆ.
ಈಗ ಅದೇ #ಮೇಯರ್ ವೀರೇಶ್ ಅವರು ಪೌರಕಾರ್ಮಿಕರೊಂದಿಗೆ ಕುಳಿತು ಉಪಹಾರ ಸೇವಿಸಿದ್ದಾರೆ! ಇತ್ತೀಚೆಗೆ ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲೂ ಕೂಡ ವೀರೇಶ್ ಅವರು ಯಾವ ಕೆಲಸವೂ ಮೇಲಲ್ಲ, ಇನ್ನ್ಯಾವ ಕೆಲಸವೂ ಕೀಳಲ್ಲ ಎಂದಿದ್ದರು. ನಡೆ ನುಡಿಯಲ್ಲೂ ಒಂದೇ ಆಗಿರುವ ಮೇಯರ್ ಅವರು ಇಂದು ಮಹಾನಗರ ಪಾಲಿಕೆಯ ವಾರ್ಡ್ ನಂ 25 ರಲ್ಲಿ ಬರುವ ಡಿಸಿಎಂ ಬಡಾವಣೆಯ ವಿವೇಕಾನಂದ ಪಾರ್ಕಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ತಮ್ಮ ನೇತೃತ್ವದಲ್ಲಿ ನಡೆಸಿ. ನಂತರ ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿ ಸರಳತನ ಮೆರೆದಿದ್ದಾರೆ.
...
https://www.youtube.com/watch?v=Ak5wYiNBqcY
ಚಿತ್ರದುರ್ಗ:
ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಹಾಗು ಪಕ್ಷೇತರ ಅಭ್ಯರ್ಥಿ ನಡುವೆ ವಾಗ್ವಾದಚಿತ್ರದುರ್ಗ ನಗರಸಭೆ 34ನೇ ವಾರ್ಡ್ ನಲ್ಲಿ ಘಟನೆ ನಡೆದಿದೆ
ಮತದಾನದ ವೇಳೆ ವಾರ್ಡ್ ಗೆ ಭೇಟಿ ನೀಡಿದ ಶಾಸಕರಿಗೆ ತರಾಟೆ.
ಹಣದ ಹೊಳೆ ಹರಿಸಿ ಮತದಾರರ ಮೇಲೆ ಪ್ರಭಾವ ಬೀರಲು ಬಂದಿದ್ದೀರ ಅಂತ ಪ್ರಶ್ನೆ ಮಾಡಿದ ಪಕ್ಷೇತರ ಅಭ್ಯರ್ಥಿಗಳು.
ಆಕ್ಷೇಪಕ್ಕೆ ಹೆದರಿ ಸ್ಥಳದಿಂದ ಹೊರಟ ಶಾಸಕ ತಿಪ್ಪಾರೆಡ್ಡಿ.
...
https://www.youtube.com/watch?v=6fQiuxxAXBY