ಕೃಷ್ಣನು ಬಹಳ ಆತುರದಿಂದ ಹಣ್ಣು ಮಾರುವವಳ ಬಳಿ
ಹೋಗುತ್ತಿದ್ದಾಗ ಅವನ ಬೊಗಸೆಯಲ್ಲಿದ್ದ ಭತ್ತದ
ಬಹುಪಾಲು ದಾರಿಯಲ್ಲಿಯೇ ಸೋರಿ ಹೋಯಿತು.
ಆದರೂ ಹಣ್ಣು ಮಾರುವವಳು ಕೃಷ್ಣನ ಕೈತುಂಬಾ
ಹಣ್ಣುಗಳನ್ನು ಕೊಟ್ಟಳು. ಆಗ ತಟ್ಟನೆ ಅವಳ ಹಣ್ಣಿನ
ಬುಟ್ಟಿಯೂ ಆಭರಣ ಗಳಿಂದಲೂ ಚಿನ್ನದಿಂದಲೂ
ತುಂಬಿಹೋಯಿತು.
(V anantha Krishna Acharya)
( ದುರ್ಯೋಧನ ಗರ್ವಭಂಗ )
ಮಯಾ ದಾನವನ ಮಾಯಾ ಸೃಷ್ಟಿಯಿಂದ
ದುರ್ಯೋಧನನು ಬ್ರಮೆಗೊಳಗಾಗಿದ್ದನು.
ದುರ್ಯೋಧನನ ಅವಸ್ಥೆಯನ್ನು ಕಂಡು ಭೀಮನು
ನಕ್ಕನು. ಸಭೆಯಲ್ಲಿದ್ದ ಸ್ತ್ರೀಯರು ರಾಜ ವರ್ಗದವರು
ಮತ್ತಿತರರು ನಕ್ಕರು. ಯುಧಿಷ್ಠಿರನು ಅವರನ್ನು
ತಡೆಯಲೆತ್ನಿಸಿದನು. ಆದರೆ ಕೃಷ್ಣನು ಭೂಭಾರವನ್ನು
ಇಳಿಸುವ ಉದ್ದೇಶದಿಂದ ಮೌನವಾಗಿಯೇ ಇದ್ದನು.
(V anantha Krishna Acharya)
( ಒಬ್ಬ ಅವಧೂತನಿಗೂ ಮತ್ತು ಯದು
ರಾಜನಿಗೂ ನಡೆದಂತ ಸಂವಾದ )
ಜೇನುನೊಣವು ಹಿರಿದು ಕಿರಿದೆನ್ನದೆ ಎಲ್ಲಾ ಪುಷ್ಪ ಗಳಿಂದಲೂ
ಮಧುವನ್ನು ಸಂಗ್ರಹಿಸುವಂತೆ, ಬುದ್ಧಿವಂತನಾದ ವ್ಯಕ್ತಿಯು
ಎಲ್ಲ ಧರ್ಮಗಳ ಸಾರವನ್ನು ಗ್ರಹಿಸಬೇಕು.
)V anantha Krishna Acharya)
ದೇವತೆಗಳು ದಾನವರು ತಮ್ಮ ಭುಜಬಲದಿಂದ ಅಸಾಧಾರಣವಾದ
ಆಮೆಯ ಬೆನ್ನಮೇಲೆ ಮಂದರಾಚಲವನ್ನು ತಿರುಗಿಸುತ್ತಿದ್ದರು;
ಆಮೆಯ ಮೇಲೆ ಪರ್ವತ ತಿರುಗುತ್ತಿದ್ದಾಗ ಅದರ
ಮೈಯನ್ನು ತುರಿಸಿದಂತಾಯಿತು. ಹೀಗೆ
ಭಗವಂತನು ಹಿತಸ್ಪರ್ಶವನ್ನು ಅನುಭವಿಸಿದನು.
(ಸಮುದ್ರ ಮಂಥನದಲ್ಲಿ, ಅಮೃತಶಿಲೆಯ ಪರ್ವತವನ್ನು
ಬೆಳಗುವ ಮಿಂಚನ್ನು ಮೀರಿಸುವ ವಿದ್ಯುತ್ ನಂತೆ ಭಾಗ್ಯ
ದೇವತೆಯಾದ ಮಹಾಲಕ್ಷ್ಮಿಯು ಉದಿಸಿದಳು.
(V Anantha Krishna Acharya)
(ಇಂದ್ರ ಮತ್ತು ಸುರಭಿಯರ ಪ್ರಾರ್ಥನೆ)
ಸುರಭಿ ಮಾತೆಯು ತನ್ನ ಹಾಲಿನಿಂದ ಭಗವಂತನಿಗೆ
ಅಭಿಷೇಕವನ್ನು ಮಾಡಿದಳು. ಅದಿತಿ ಪುತ್ರನಾದ
ಇಂದ್ರನು ತನ್ನ ವಾಹನವಾದ ಐರಾವತದ ಸೊಂಡಿಲಿನಲ್ಲಿ
ಆಕಾಶಗಂಗೆಯ ಜಲವನ್ನು ತುಂಬಿಸಿಕೊಂಡು ಬಂದು
ಭಗವಂತನಿಗೆ ಅಭಿಷೇಕ ಮಾಡಿ, ನಂತರ ಭಗವಂತನಿಗೆ
ಗೋವಿಂದನೆಂದು ಹೆಸರಿಟ್ಟನು.
(V anantha Krishna Acharya)