( ಮಹಾನ್ ತ್ಯಾಗಿ ರಂತಿದೇವನ ಚರಿತ್ರೆ )
ದೇವಾಪಿ ಮತ್ತು ಭೀಷ್ಮ ಪಿತಾಮಹನ ತಂದೆ ಯಾದ ಶಾಂತನು
ಇವರಿಬ್ಬರೂ ಬಾಹೀಕ ಪ್ರತೀಪನ ಪುತ್ರರು. ಹಠಯೋಗಿ
ಯಾದ ದೇವಾಪಿ ಕಲಾಪ ಎಂಬ ಗ್ರಾಮದಲ್ಲಿ ಇಂದಿಗೂ
ಜೀವಂತವಾಗಿಇದ್ದಾನೆ. ಕಲಿಯುಗದಲ್ಲಿ ಚಂದ್ರವಂಶ
ಕೊನೆಗೊಂಡು ಸತ್ಯಯುಗ ಆರಂಭವಾದಾಗ ದೇವಾಪಿಯು
ಚಂದ್ರ ವಂಶವನ್ನು ಪುನಃ ಸ್ಥಾಪಿಸುವನು.
(V anantha Krishna Acharya)
ನಿನಗೆ ಸ್ತ್ರೀಯ ದೇಹ ದೊರಕಿದೆ ಹಾಗಾಗಿ ನಿನ್ನನ್ನು ನೀನು ಸ್ತ್ರೀ ಅಂತ
ಅನಿಸಿಕೊಂಡಿದಿ, ನನಗೆ ಪುರುಷನ ದೇಹ ದೊರಕಿದೆ ಹಾಗಾಗಿ
ನನ್ನನ್ನು ನಾನು ಪುರುಷ ಎಂದು ಎನಿಸಿಕೊಂಡಿದ್ದೇನೆ,
ಆದರೆ ನಾನು ಪುರುಷನೂ ಅಲ್ಲ ನೀನು ಸ್ತ್ರೀಯೂ ಅಲ್ಲ .
ನಿನ್ನ ಗರ್ಭದಲ್ಲಿ ನಾನು ಜನಿಸಿದ್ದರಿಂದ ನನ್ನನ್ನು ನೀನು ನಿನ್ನ ಮಗ
ಅಂತ ಅನಿಸಿ ಕೊಂಡಿದ್ದೀಯಾ, ನೀನು ನನ್ನನ್ನು ಪಾಲನೆ-ಪೋಷಣೆ
ಮಾಡಿದ್ದರಿಂದ ನಿನ್ನನ್ನು ನಾನು ನನ್ನ ತಾಯಿ ಅಂತ ಅನಿಸಿ ಕೊಂಡಿದ್ದೇನೆ
ಆದರೆ ನೀನು ನನ್ನ ತಾಯಿಯೂ ಅಲ್ಲ ನಾನು ನಿನ್ನ ಮಗನು ಅಲ್ಲ.
(Anantha Krishna acharya)
( ಸುಧಾಮನ ದ್ವಾರಕಾ ಸಂದರ್ಶನ )
ಈ ಕೊಳಕು ವೇಷದ ಬಡಬ್ರಾಹ್ಮಣನು ಅದೇನು ಪುಣ್ಯಕರ್ಮ
ಮಾಡಿದ್ದಾನೆ ? ಜನರು ಆತನನ್ನು ದೀನನೆಂದು ಭಾವಿಸುತ್ತಾರೆ.
ಆದರೆ ಈ ತ್ರಿಲೋಕ ಗುರು ಗೌರವದಿಂದ ಆತನ ಸೇವೆ
ಮಾಡುತ್ತಿರುವನು. ಲಕ್ಷ್ಮೀದೇವಿಯ ಪಕ್ಕದಲ್ಲಿ ಕುಳಿತ
ಭಗವಂತನು ಆಕೆಯನ್ನು ಅಲ್ಲೇ ಬಿಟ್ಟು ಎದ್ದು ಹೋಗಿ
ಈತನನ್ನು ತನ್ನ ಅಣ್ಣನೋ ಎಂಬಂತೆ ಆಲಿಂಗಿಸಿಕೊಂಡನು.
(V anantha Krishna Acharya)
ಸತ್ಯಯುಗದಲ್ಲಿ ಭಗವಂತನ ಧ್ಯಾನ, ತ್ರೇತಾಯುಗದಲ್ಲಿ
ಯಜ್ಞಗಳ ಆಚರಣೆ, ದ್ವಾಪರಯುಗದಲ್ಲಿ ಪ್ರಭುವಿನ
ಪಾದಕಮಲಗಳ ಸೇವೆ ಇವುಗಳಿಂದ ಯಾವ ಫಲಗಳನ್ನು
ಪಡೆಯಬಹುದೋ ಅವನ್ನೇ ಕಲಿಯುಗದಲ್ಲಿ ಕೇವಲ
ಹರಿನಾಮದ ಸಂಕೀರ್ತನೆಯಿಂದ ಪಡೆಯಬಹುದು.
(V anantha Krishna Acharya)
ಕೃಷ್ಣ-ಬಲರಾಮ ರಿಂದ ಸೋತು ಅವಮಾನಗೊಂಡ
ಜರಾಸಂಧನು ಕಾಡಿಗೆ ಹೋಗಲು ನಿಶ್ಚಯಿಸಿದನು. ಆದರೆ
ದಾರಿಯಲ್ಲಿ ಅವನಿಗೆ ಅನೇಕ ರಾಜರು ಹೀಗೆ ಹೇಳುತ್ತಾರೆ ;
"ಯಾದವರಿಂದ ನಿನಗಾದ ಪರಾಭವವು ನಿನ್ನ ಪೂರ್ವಜನ್ಮದ
ಕರ್ಮ ಅಷ್ಟೇ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ"
(V anantha Krishna Acharya)